ಭಾರತದಲ್ಲಿ ರಾಷ್ಟಿಯ ನದಿ ಜೋಡಣೆ ಯೋಜನೆಯನ್ನು ೩ ಮುಖ್ಯ ವಿಧಗಳನ್ನಾಗಿ ಮಾಡಲಾಗಿದೆ.
೧. ಹಿಮಾಲಯ ಭಾಗ
೨. ರ್ಯಾಯ ದ್ವೀಪ ಅಥವಾ ಪೆನಿನ್ಸುಲಾರ್
೩. ಆಂತರಿಕ ನದಿ ಘಟಕಗಳು.
ಈ ಯೋಜನೆಗಳೆಲ್ಲವನ್ನೂ ಭಾರತದ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು ಜಲ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಮಾಲಯನ್ ಘಟಕಕ್ಕಗಿ ೧೪ ಅಂತರ್ ಜೋಡಣೆ ಯೋಜನೆಗಳು, ಪೆನಿನ್ಸುಲಾರ್ ಘಟಕಕ್ಕಾಗಿ ೧೬ ಅಂತರ್ ಜೋಡಣೆ ಯೋಜನೆಗಳು, ಮತ್ತು ಇತರೆ ಆಂತರಿಕ ನದಿ ಘಟಕಗಳಿಗಾಗಿ ೩೭ ನದಿಗಳ ಸಂರ್ಕ ಯೋಜನೆಗಳನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ ಡಬ್ಲ್ಯೂ ಡಿ ಎ) ರೂಪಿಸಿದೆ. ಮಾನ್ಸೂನ್ ಮಳೆ ನೀರಿನ ಸಂಪತ್ತನ್ನು ಸಂರಕ್ಷಿಸಿ ಜಲಾಶಯಗಳಲ್ಲಿ ಶೇಕರಿಸುವುದು ಹಾಗೂ ಈ ನೀರನ್ನು ನದಿಗಳು , ಅಂತರ್ ಸಂರ್ಕ ಕಾಲುವೆಗಳ ಮೂಲಕ ದೇಶದ ಉದ್ದಗಲಕ್ಕೂ ವಿತರಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶ.
ನದಿ ಜೋಡಣೆ ಕಲ್ಪನೆಯು ೧೮೫೮ ರಲ್ಲಿ ಮೊದಲು ಕಲ್ಪನೆಗೆ ಬಂದದ್ದು. ಕೃಷ್ಣಾ ಹಾಗೂ ಗೋದಾವರಿ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿಸಿದ ಬ್ರಿಟಿಷ್ ಅಧಿಕಾರಿ ಸರ್ ಅರ್ಥರ್ ಕಾಟನ್ ಎಂಬಾತ ಹೇಳಿಕೊಟ್ಟ ಕಲ್ಪನೆಯದು. ಹೆಚ್ಚು ನೀರಿನ ಹರಿವಿದ್ದ ನದಿಗಳನ್ನು ಕಡಿಮೆ ನೀರಿನ ಹರಿವಿರುವ ನದಿಗಳೊಡನೆ ಕಾಲುವೆಗಳ ಮೂಲಕ ಜೋಡಿಸುವುದು ಆತನ ಕಲ್ಪನೆಯಾಗಿತ್ತು. ಆತ ಇಂಗ್ಲೆಂಡ್ ಮತ್ತು ಯುರೋಪ್ ನದಿಗಳ ಅನುಭವವನ್ನು ಹೊತ್ತು ಬಂದಿದ್ದ, ಆದರೇ ಅಲ್ಲಿನ ನದಿಗಳು ಭಾರತೀಯ ನದಿಗಳಿಗಿಂತ ಭಿನ್ನ, ಅಂದರೇ ಯುರೋಪ್ ನದಿಗಳಲ್ಲಿನ ನೀರಿನ ಮಟ್ಟವು ವಾರ್ಷಿಕ ಕಾಲಘಟ್ಟದಲ್ಲಿ ಗುರುತರವಾದ ಏರಿಳಿತಗಳನ್ನು ಕಾಣುವುದಿಲ್ಲ.
ಉಷ್ಣ ವಲಯದ ಪ್ರದೇಶದಲ್ಲಿರುವ ದೇಶಗಳಲ್ಲಿ ಹೆಚ್ಚು ನೀರಿನ ಹರಿವಿರುವ ನದಿ ಹಾಗೂ ಕಡಿಮೆ ನೀರಿನ ಹರಿವಿರುವ ನದಿ ಎಂಬ ಪರಿಕಲ್ಪನೆಯೇ ಇಲ್ಲ. ಅಲ್ಲಿ ಮಳೆ ಬಂದರೇ ಪ್ರವಾಹ ಉಂಟಾಗುತ್ತದೆ, ಇಲ್ಲವಾದರೇ ನೀರೇ ಕಾಣ ಸಿಗುವುದಿಲ್ಲ. ಚೆಕ್ ಡ್ಯಾಮ್ಗಳನ್ನು ಕಟ್ಟಿಸುವುದು, ಮಳೆ ನೀರ ಶೇಖರಣೆಗಾಗಿ ಇಂಗುಗುಂಡಿ ನರ್ಮಿಸುವುದು ತಕ್ಷಣಕ್ಕೆ ಕಂಡುಕೊಳ್ಳಬಹುದಾದ ಪರಿಹಾರ.
ನದಿ ಜೋಡಣೆಗೆ ಬೃಹತ್ತಾದ ರ್ಥಿಕ ಅಗತ್ಯತೆಯೂ ಬೇಕಾಗುತ್ತದೆ, ವಿಶೇಷವಾಗಿ ಸರಾಸರಿ ೩೫ ಡಿಗ್ರಿ ಸೆಂಟಿಗ್ರೇಡ್ನಷ್ಟು ತಾಪಮಾನ ಹೊಂದಿರುವ ನಮ್ಮ ದೇಶದಲ್ಲಿ, ಒಂದು ನದಿಯನ್ನು ಮತ್ತೊಂದು ನದಿಗೆ ಜೋಡಿಸಲು ಸಾವಿರಾರು ಕಿ,ಮೀ ನಷ್ಟು ಕಾಲುವೆಗಳನ್ನು ಕಟ್ಟಿಸುವುದೇ ಆದರೆ, ನದಿಯಲ್ಲಿನ ಬಹುಪಾಲು ನೀರು ಆವಿಯಾಗಿಯೇ ಹೋಗುತ್ತದೆ. ಮೇಲಾಗಿ ಭೂಮಿಯೂ ಕೂಡ ಕಾದಿರುತ್ತದೆ.
ನೀರಿನಲ್ಲಿ ಉಪ್ಪಿನಂಶವು ೬೦ ಕಿ.ಮೀ ನಷ್ಟು ಒಳನಾಡು ಆವರಿಸಿದೆ. ಭಾರತವು ೭೪೦೦ ಕಿ.ಮೀ ನಷ್ಟು ಸಮುದ್ರ ತೀರವನ್ನು ಹೊಂದಿದೆ. ಸಮೀಕ್ಷೆಯೊಂದರ ಪ್ರಕಾರ, ನದಿಯ ನೀರು ಹರಿದು ಸಮುದ್ರವನ್ನು ಸಏರಿದ್ದಲ್ಲಿ ಲವಣಯುಕ್ತ ನೀರು ೧೦೦ ರಿಂದ ೧೩೦ ಕಿ ಮೀ ನಷ್ಟು ಒಳನುಗ್ಗುತ್ತದೆ. ಹಾಗಾದಲ್ಲಿ ಭಾರತದ ಮೂರರ ಒಂದು ಭಾಗದಷ್ಟು ಭೌಗೋಳಿಕ ಪ್ರದೇಶವನ್ನು ಲವಣಯುಕ್ತ ನೀರಿನಿಂದಾಗಿ ಕಳೆದುಕೊಳ್ಳಬೇಕಾಗುತ್ತದೆ.
ಪರಿಸರದ ಮೇಲೆ ಪ್ರಭಾವ
ನದಿಗಳ ಜೋಡಣೆಯು ಪರಿಸರದ ಮೇಲೆ ವ್ಯಾಪಕವಾದ ಪರಿಣಾಮವನ್ನು ಬೀರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ದೊಡ್ಡ ಮಟ್ಟದ ಅರಣ್ಯ ನಾಶಕ್ಕೆ ಕಾರಣವಾಗಬಹುದಾದ ಯೋಜನೆಯೂ ಹೌದು. ಆದ್ದರಿಂದ ವಿವಿಧ ಬಗೆಯ ಸಸ್ಯ ಮತ್ತು ಪ್ರಾಣಿಗಳ ಸ್ವಾಭಾವಿಕ ವಾಸಸ್ಥಾನ ಅಥವಾ ಅನಿಮಲ್ ಕಾರಿಡಾರ್ ನಾಶವಾಗುತ್ತಿದೆ. ಈ ದೊಡ್ಡ ಮಟ್ಟದ ಪರಿಸರ ಹಾನಿಯೂ ಮಳೆಯಾಗುವುದರ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಹಾಗೂ ನದಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಜೀವವೈವಿಧ್ಯವನ್ನು ನಾಶಮಾಡುತ್ತದೆ. ಮಾತ್ರವಲ್ಲದೇ ಈ ನದಿ ಜೋಡಣೆಯಿಂದಾಗಿ ಹಲವಾರು ಪ್ರಾಯೋಗಿಕ ಹಾಗೂ ವ್ಯವಸ್ಥಾಪಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಎತ್ತಿನ ಹೊಳೆ ಯೋಜನೆಯ ವಿವರ, ಸವಾಲು ಮತ್ತು ಪರಿಣಾಮ
ಈ ಯೋಜನೆ ಆರಂಭಿಸಲು ಸರ್ಕಾರ ನೀಡಿರುವ ಮಾಹಿತಿ ಹೀಗಿದೆ : ರಾಜ್ಯದ ಪರ್ವ ಭಾಗದ ಜಿಲ್ಲೆಗಳಲ್ಲಿ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸುವ ದೃಷ್ಟಿಯಿಂದ ಯಾವುದೇ ಅಂತರಾಜ್ಯ ವಿವಾದಗಳಿಲ್ಲದ ಮಳೆಗಾಲದಲ್ಲಿ ವ್ರ್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ ಪ್ರವಾಹದ ನೀರನ್ನು ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮುಕೂತು ಜಿಲ್ಲೆಗಳಿಗೆ ಪೂರಯಸಲು ನರ್ಧರಿಸಲಾಗಿದೆ.
ಈ ಎತ್ತಿನ ಹೊಳೆ ಯೋಜನೆಯಲ್ಲಿ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆಗೆ ೪, ಕಾಡುಮನೆ ಹೊಳೆಗೆ ೨, ಕೇರಿ ಹೊಳೆಗೆ ೧, ಹೊಂಗಡ ಹಳ್ಳಕ್ಕೆ ೧, ಒಟ್ಟು ೮ ಬ್ಯಾರೇಜ್ಗಳ ಮೂಲಕ ಮೇಲಕ್ಕೆತ್ತುವ ನೀರನ್ನು ಹೆಚ್ಚಿನ ಭೂಸ್ವಾಧೀನಬಾಗದಂತೆ ಎಚ್ಚರವಹಿಸಿ ಈಗಾಗಲೇ ಅಸ್ತಿತ್ವದಲ್ಲಿರುವ ಬಹುತೇಕ ರೈಲ್ವೆ ಮತ್ತು ರಸ್ತೆ ಮರ್ಗಗಳ ಪಕ್ಕದಲ್ಲಿಯೇ ಸಮನಾಂತರವಾಗಿ ಭೂಮಿಯೊಳಗೆ ಅಳವಡಿಸಲಾಗುವ ಪೈಪ್ಗಳ ಮುಖಾಂತರ ಸಕಲೇಶಪುರ ತಾಲೂಕಿನ ಹರವಳ್ಳಿ ಬಳಿಯ ವಿತರಣಾ ತೊಟ್ಟಿಗೆ ನೀರನ್ನು ಕೊಂಡೊಯ್ಯಲಾಗುತ್ತದೆ.
ನೇತ್ರಾವತಿ ಯೋಜನೆಗೆ ವಿರೋಧವೇ ಹೆಚ್ಚು : ಈ ಯೋಜನೆಗೆ ಬಹಳ ಪ್ರಮುಖವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಲ್ಲದೇ, ನೇತ್ರಾವತಿಯ ಪ್ರಮುಖ ಎಂಟು ಉಪದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ನೀರೆತ್ತುವ ಈ ಯೋಜನೆ ರ್ಕಾರದ ಸುಳ್ಳು ಕಥೆಯಷ್ಟೇ ಎಂದು ನೇತ್ರಾವತಿ ಹೋರಾಟಗಾರರು ಆಕ್ರೋಶ ಪಡುತ್ತಿದ್ದಾರೆ. ಕೃಷಿ ಮತ್ತು ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡುವ ಹುನ್ನಾರವೂ ಅಡಗಿದೆ. ಮಾತ್ರವಲ್ಲದೇ, ಕೋಲಾರ, ಚಿಕ್ಕಬಳ್ಳಾಪುರವನ್ನು ಒಳಗೊಂಡು ಹಾಸನ, ಚಿಕ್ಕಮಗಳೂರು, ಚಿತ್ರದರ್ಗ, ರಾಮನಗರ, ಕನಕಪುರ, ಬೆಂಗಳೂರಿಗೂ ನೀರು ಹರಿಸುವ ಯೋಜನೆಯೆಂದು ನೇತ್ರಾವತಿ ನದಿ ತಿರುವು ಸಮಗ್ರ ಯೋಜನಾ ವರದಿಯಲ್ಲಿ ಉಲ್ಲೇಖಿಸಿರುವುದು ಮೂಲ ನದಿ ಪಾತ್ರದ ಜನರ ಆಕ್ರೋಶಕ್ಕೆ ಅಕ್ಷರಶಃ ಕಾರಣವಾಗಿದೆ. ಎಂಟು ಅಣೆಕಟ್ಟು, ನೂರಾರು ಕಿಲೋ ಮೀಟರ್ ಉದ್ದದ ಪೈಪ್ ಲೈನ್, ಪವರ್ ಹೌಸ್, ವಿದ್ಯುತ್ ಸರಬರಾಜು ವ್ಯವಸ್ಥೆಗಳು ಸೇರಿ ಹತ್ತಾರು ಕಾಮಗಾರಿಗಳು ಈ ನದಿ ತಿರುವಿಗೆ ಆಗಬೇಕಾಗಿರುವುದರಿಂದ ಪಶ್ಚಿಮಘಟ್ಟ ಬಹುತೇಕ ನಾಶವಾಗುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ, ಮಳೆ ಪ್ರಮಾಣ, ನೀರಿನ ಹರಿವಿನ ಸಾಂದ್ರತೆ, ಅನುಕೂಲ ಮತ್ತು ಅನಾನುಕೂಲವನ್ನು ಅಧ್ಯಯನ ಮಾಡದೇ ರ್ಕಾರ ಯೋಜನೆ ರೂಪಿಸಿದ್ದು ಸ್ಪಷ್ಟವಾಗುತ್ತದೆ.
ಹಸಿರು ಪೀಠ ಗ್ರೀನ್ ಸಿಗ್ನಲ್ :ಎತ್ತಿನಹೊಳೆ ನದಿ ತಿರುವು ಜಾರಿಯಿಂದಾಗಿ ಪಶ್ಚಿಮ ಘಟ್ಟದಲ್ಲಿನ ಪರಿಸರ, ವನ್ಯಜೀವಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದನೀ ಹಿಂದೆ ಬೆಂಗಳೂರಿನ ಕೆ. ಎನ್ ಸೋಮಶೇಖರ್ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಸಲ್ಲಿಸಿದ್ದ ರ್ಜಿಗಳನ್ನು ಹಸಿರು ನ್ಯಾಯ ಮಂಡಳಿ, ಇದು ಕೇವಲ ಕುಡಿಯುವ ನೀರಿನ ಯೋಜನೆ ಯೋಜನೆಗಳಲ್ಲಿ ತೊಡಕುಗಳಿಲ್ಲ ಎನ್ನುವುದನನ್ನು ಪರಿಶೀಲಿಸಿ ತಿರಸ್ಕರಿಸಿತ್ತು. ನಂತರ ಸುಪ್ರೀಂ ಕರ್ಟಿನಲ್ಲಿಯೂ ಕೂಡ ಈ ರ್ಜಿಗಳನ್ನು ತಿರಸ್ಕರಿಸಿ, ರ್ಕಾರಕ್ಕೆ ಕೆಲವು ಷರತ್ತುಗಳನ್ನು ನೀಡಿತು. ಇದು ಪರಿಸರವಾದಿಗಳ ಪಾಲಿಗೆ ಹಿನ್ನೆಡೆಯಾಗಿದೆ ಎನ್ನುವುದು ಅಪ್ಪಟ ಸತ್ಯ.
ಅಧಿಕ ಮಟ್ಟದ ಅನಿಶ್ಚಿತತೆ
ಇಂತಹ ಯೋಜನೆಗಳ ಸಂಭವನೀಯ ಪರಿಣಾಮದ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದರೂ, ಇದು ವಾಸ್ತವದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂದು ಯಾರೂ ಊಹಿಸಲಾಗುವುದಿಲ್ಲ. ಜೀವನೋಪಾಯದ ನಷ್ಟದಿಂದ ಹಿಡಿದು ಮಣ್ಣಿನ ಗುಣಮಟ್ಟದ ಬದಲಾವಣೆಯಂತಹ ಹಲವಾರು ಅನೀರೀಕ್ಷಿತ ಪರಿಣಾಮಗಳಾಗವ ಹೆಚ್ಚಿನ ಸಾಧ್ಯಸಾಧ್ಯತೆಗಳಿವೆ. ನದಿ ಜೋಡಣೆಯ ಉದ್ದೇಶದ ಹಿನ್ನೆಲೆಯು ಒಳ್ಳೆಯದಾಗಿದ್ದರೂ ಅದರಿಂದ ಅಪಾಯಗಳು ಬಹಳ ಇವೆ ಎನ್ನುವುದನ್ನು ಮರೆಯುವಂತಿಲ್ಲ.
-ಶ್ರೀರಾಜ್ ವಕ್ವಾಡಿ












