ಗೋವಿನ
ಕೊರಳಲ್ಲಾಡುವ ಘಂಟೆ
ದನಿಮಾಡುತ್ತಿದೆ
ಆ ಸಂಭ್ರಮಕ್ಕೆ
ಪೂರ್ತಿ ಪಾಲ್ಪಡೆಯಲಾಗ್ತಿಲ್ಲ..!
ಕ್ಷಮಿಸಿ
ನಿಶೆಯ ಕತ್ತಲೆಯ
ಸಡಗರಕ್ಕಿನ್ನು
ಕೊನೆಯಾಗಿಲ್ಲ ಎಂದು
ಹೇಳಲ್ಹೊರಟೆ ಅಷ್ಟೇ...!
ಬದುಕೆಂದರೇ,
ನನ್ನ ಕಣ್ಣಿನ ಬಿಂದುವಿನಲಿ
ನಾನೇ ಕಾಣುವ ನನ್ನದೇ ಬಿಂಬ..!
ನಾಳೆಗಳಿಲ್ಲದ ಇಂದು
ವಿಷಾದ ಹಾಡುತ್ತಿದೆ...!
ಇಂದು ಇಲ್ಲದ ನಿನ್ನೆ
ಮತ್ತದೇ ಬಣ್ಣವಿಲ್ಲದ
ಕಾವ್ಯಕ್ಕೆ ರಾಗ ಹಾಕುತ್ತಿದೆ...!
ನೀವು ಏನೇ ಹೇಳಿ
ಇದು ದನಿಯಿಲ್ಲದ ದನಿ..!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)

👌👌👌👌👌
ReplyDeleteThank You
DeleteThank You So Much
ReplyDelete